Uncategorized
ರಸ್ತೆ ದುರವಸ್ಥೆ; ಯಕ್ಷಗಾನ ಶೈಲಿಯ ಹಾಡು ವೈರಲ್
ಉಡುಪಿ : ಜಿಲ್ಲೆಯಲ್ಲಿ ಮಳೆಗಾಲ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಈಗಲೂ ಆಗಿಂದಾಗೆ ಧಾರಾಕಾರ ಮಳೆ ಸುರಿಯುತ್ತಲೇ ಇದೆ. ಉಡುಪಿ ಜಿಲ್ಲೆ ಸುಸಜ್ಜಿತ ರಸ್ತೆಗಳಿಗೆ ಹೆಸರುವಾಸಿ. ಆದರೆ ಮಳೆಗಾಲ ಬಂತೆಂದರೆ ನಗರದ ರೈಲ್ವೆ ಬ್ರಿಜ್, ಪರ್ಕಳದ ರಾಷ್ಟ್ರೀಯ ಹೆದ್ದಾರಿ ಹೊಂಡ ಗುಂಡಿ ಆಗಿಬಿಡುತ್ತದೆ. ಈ ರಸ್ತೆಗಳಲ್ಲಿ ಸಂಚರಿಸುವುದೇ ಕಷ್ಟ.
ಇದೀಗ ರಸ್ತೆ ದುರವಸ್ಥೆ ಬಗ್ಗೆ ಯಕ್ಷಗಾನ ಶೈಲಿಯಲ್ಲಿ ಹಾಡಿರುವ ಒಂದು ಹಾಡು ಸಖತ್ ವೈರಲ್ ಆಗುತ್ತಿದೆ. ಅಯ್ಯೋ ಅಕಟಕಟಾ ಎಂದು ರೋದಿಸುತ್ತಿರುವ ಆಡಿಯೋ ಮೂಲಕ ಆಕ್ರೋಶ ಹೊರಹಾಕಲಾಗಿದೆ. ರೈಲ್ವೆ ಬ್ರಿಡ್ಜ್ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಪರ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಪೂರ್ಣಗೊಂಡಿಲ್ಲ. ಈ ಬಗ್ಗೆ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ ರೋಸಿ ಹೋದ ಜನ ತಾವೇ ಸ್ವತಃ ಮಣ್ಣುಹಾಕಿ ರಸ್ತೆ ರಿಪೇರಿ ಮಾಡುತ್ತಿದ್ದಾರೆ. ಜನರ ಆಕ್ರೋಶದ ಪ್ರತೀಕದಂತಿರುವ ಯಕ್ಷಗಾನ ಭಾಗವತಿಕೆಯ ಹಾಡು ಸಖತ್ ವೈರಲ್ ಆಗುತ್ತಿದೆ.