ಯೋಗೇಶ್ವರ್ ಪಕ್ಷ ತೊರೆಯಲ್ಲ: ಡಾ.ಅಶ್ವತ್ಥ ನಾರಾಯಣ್
ರಾಮನಗರ: ಸಿ.ಪಿ.ಯೋಗೇಶ್ವರ್ ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯಲ್ಲ. ಕಾಂಗ್ರೆಸ್ ನವರು ಆಹ್ವಾನ ಕೊಡಬಹುದು. ಅದು ಸಿಪಿವೈ ಶಕ್ತಿ. ಈಗಾಗಿ ಕಾಂಗ್ರೆಸ್ನಿಂದ ಆಹ್ವಾನಿಸಿದ್ದಾರೆ ಎಂದು ಸಿಪಿವೈ ಕಾಂಗ್ರೆಸ್ ಸೇರುವ ವಿಚಾರಕ್ಕೆ ಸಚಿವ ಡಾ. ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಯೋಗೇಶ್ವರ್ ಬಿಜೆಪಿ ತೋರೆಯುವುದಿಲ್ಲ. ಮುಂದಿನ ಬಾರಿಯೂ ಬಿಜೆಪಿಯಿಂದಲೇ ಯೋಗೇಶ್ವರ್ ಸ್ಪರ್ಧೆ ಮಾಡ್ತಾರೆ. ನಮ್ಮ ಪಕ್ಷದಲ್ಲಿಯೇ ಇರುತ್ತಾರೆ ಎಂದರು.
ಇನ್ನು ಸಿಪಿವೈ ಗೆ ಸಚಿವ ಸ್ಥಾನ ಸಿಗುವ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಈಗಾಗಲೇ ಹಲವು ಬಾರಿ ಸಚಿವರಾಗಿದ್ದಾರೆ. ನಮ್ಮ ಪಕ್ಷದ ನಾಯಕರು ಅವರು ಮುಂದೆ ಸಿಪಿವೈಗೆ ಒಳ್ಳೆಯ ಅವಕಾಶವಿದೆ. 2023 ಕ್ಕೆ ಬಿಜೆಪಿಯಿಂದಲೇ ಯೋಗೇಶ್ವರ್ ಸ್ಪರ್ಧೆ ಮಾಡೋದು ಖಚಿತ., ಯಾವುದೇ ಅನುಮಾನವಿಲ್ಲ ಎಂದು ಅವರು ತಿಳಿಸಿದರು.
ಇನ್ನು ತೈಲ ದರ ಸಾಕಷ್ಟು ಏರಿಕೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತೈಲ ದರಕ್ಕೆ ಕಡಿವಾಣ ಹಾಕಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡ ಪೆಟ್ರೋಲ್ ದರ ಇಳಿಸಿದೆ. ಡಿಸೇಲ್ ಹಾಗೂ ಪೆಟ್ರೋಲ್ ದರ ದೊಡ್ಡ ಮಟ್ಟದಲ್ಲಿ ಕಡಿಮೆ ಮಾಡುವ ಮೂಲಕ ಜನರಿಗೆ ಅನುಕೂಲವಾಗಿದೆ ಎಂದರು.
ಇದಲ್ಲದೆಯೇ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದ್ದರಿಂದ ಪೆಟ್ರೋಲ್ ಬೆಲೆ ಇಳಿಕೆ ಎಂದು ಕಾಂಗ್ರೇಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಕಾಂಗ್ರೆಸ್ ನವರಿಗೆ ಇದೊಂದು ನೆವಾ ಅಷ್ಟೇ. ಬೈ ಎಲೆಕ್ಷನ್ ಬರುತ್ತಲೇ ಇರುತ್ತೆ, ಬಿಜೆಪಿ ಸೋತಿರುವುದಕ್ಕೂ ಪೆಟ್ರೋಲ್ ದರ ಇಳಿಕೆಗೂ ಯಾವುದೇ ಸಂಬಂಧವಿಲ್ಲ. ಪೆಟ್ರೋಲ್ ದರ ಇಳಿಸಲು ಕೆಲ ತಿಂಗಳಿಂದ ಚರ್ಚೆ ನಡೆಸಲಾಗಿತ್ತು. ಈಗಾಗಿ ಈ ನಿರ್ಧಾರ ತೆಗೆದುಕೊಳ್ಳುವಂತದ್ದಾಗಿದೆ. ಕಾಂಗ್ರೆಸ್ನ ಆರೋಪ ಈ ವಿಷಯಕ್ಕೆ ಸತ್ಯಕ್ಕೆ ದೂರವಾಗಿದೆ. ಜನರ ಶ್ರೇಯಸ್ಸನ್ನ ಗಮನದಲ್ಲಿಟ್ಟುಕೊಂಡು ಪೆಟ್ರೋಲ್ ದರ ಕಡಿಮೆ ಮಾಡಲು ತೆಗೆದುಕೊಂಡಿರೋ ನಿರ್ಧಾರ ಎಂದು ಇದೇ ವೇಳೆ ಸಚಿವರು ತಿಳಿಸಿದರು.