ಬಿಎಸ್ವೈ ಆಪ್ತನ ಮನೆ ಮೇಲೆ ಐಟಿ ದಾಳಿ ಆಗಿರುವುದರಲ್ಲಿ ಏನೋ ರಾಜಕೀಯ ಇದೆ: ಸಿದ್ದರಾಮಯ್ಯ
ಧಾರವಾಡ: ಯಡಿಯೂರಪ್ಪನವರು ಈ ಕಡೆ ಬಂದಾಗ ಐಟಿ ದಾಳಿಯ ಕುರಿತು ಅವರನ್ನೇ ಕೇಳಿ. ಬಿಎಸ್ವೈ ಅವರ ತುಂಬಾ ಆಪ್ತರಾದವರ ಮೇಲೆಯೇ ದಾಳಿ ಆಗಿದೆ ಅಂದರೆ, ಅದರಲ್ಲಿ ಎನೋ ರಾಜಕೀಯ ಇರಬಹುದೇನೋ ಗೊತ್ತಿಲ್ಲ. ಐಟಿ ದಾಳಿಗಳು ಬಿಜೆಪಿ ಎಲ್ಲರೂ ಮೇಲೆ ಆಗುವುದಿಲ್ಲ. ಸಿಎಂ ಬೊಮ್ಮಾಯಿ ಹಾಗೂ ಈಗಿರು ಹಾಲಿ ಸಚಿವರುಗಳ ಮೇಲೆ ನಡೆಯುವುದಿಲ್ಲ. ಆದರೆ ಯಡಿಯೂರಪ್ಪನವರ ಆಪ್ತನ ಮೇಲೆ ದಾಳಿ ಆಗಿದೆ ಅಂದರೆ, ಏನೂ ರಾಜಕೀಯ ಇರಬಹುದೇನೋ ನನಗೆ ಗೊತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂಧಿಗೆ ಮಾತನಾಡಿದ ಅವರು, ಐಟಿ ಇಲಾಖೆಯನ್ನು ಬಳಸಿಕೊಂಡು ಬಿಜೆಪಿಗರು, ಈ ಹಿಂದಿನಿಂದಲೂ ಕಾಂಗ್ರೆಸನವರ ಮೇಲೆ ದಾಳಿ ಮಾಡುತ್ತಾ ಬಂದಿದ್ದಾರೆ. ಈಗಲೂ ಕಾಂಗ್ರೆಸ್ನವರ ಮೇಲೆಯೇ ದಾಳಿ ಮಾಡುತ್ತಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನಮ್ಮ ಪಕ್ಷದ ಜಮ್ಮಿರ ಮೇಲೆ ರೆಡ್ ಹಾಕಲಾಗಿದೆ. ಹಾಗಾಗಿ ಹೆಚ್ಚಾಗಿ ಕಾಂಗ್ರೆಸನವರ ಮೇಲೆ ಐಟಿ ದಾಳಿಗಳು ನಡೆಯುತ್ತವೆ. ಈ ಹಿಂದೆನಿಂದಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಚೌಕಿದಾರ ಅಂತಾ ಹೇಳುತ್ತಿದ್ದರು. ಈಗ ಅವರೆಲ್ಲ ಲೂಟರ್ಸ್ ಆಗಿದ್ದಾರೆ ಎಂದು ನೇರ ವಾಗ್ದಾಳಿ ನಡೆಸಿದರು.
ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಮ್ಮವರೇ ಗೇಲುತ್ತಾರೆ:
ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಬಿಜೆಪಿ ಪಕ್ಷ ಜನರಿಗೆ ಪೊಳ್ಳು ಭರವಸೆಗಳನ್ನ ನೀಡುತ್ತಾ ಜನರನ್ನು ಭ್ರಮೆಯಲ್ಲಿರಿಸಿದ್ದರು. ಆದರೆ ಸದ್ಯ ಮತದಾರರು ಭ್ರಮನಿರಸರಾಗಿದ್ದಾರೆ. ಅಷ್ಟೇ ಅಲ್ಲದೆ ಬೆಲೆಗಳು ಏರಿಕೆಯಿಂದಾಗುತ್ತಲ್ಲೇ ಸಾಗಿವೆ. ಬೆಲೆ ಏರಿಕೆಯಿಂದಾಗಿ ಜನ ಬೇಸತ್ತು ಹೋಗಿದ್ದಾರೆ. ಹಾಗಾಗಿ ಜನ ಬದಲಾವಣೆ ಬಯಸಿ ಕಾಂಗ್ರೆಸ್ ಪರ ಒಲವು ತೋರಿದ್ದಾರೆ. ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವು ನಿಶ್ಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾಮನ್ಯ ಜನರ ಬದುಕು ಅಸ್ತವ್ಯಸ್ತತಗೊಂಡಿದೆ:
ಬಿಜೆಪಿ ಅಧಿಕಾರ ಹಿಡಿಯುವುದಕ್ಕೆ ನೀಡಿದ ಎಲ್ಲ ಭರವಸೆಗಳು ಈಗ ಸುಳ್ಳಾಗಿವೆ. ಬರಿ ಸುಳ್ಳು ಭರವಸೆ ನೀಡುತ್ತಾ ಜನರನ್ನು ಭ್ರಮಾ ಲೋಕದಲ್ಲಿ ತೇಲಾಡಿಸುತ್ತಿದ್ದರು. ಆದರೆ ಈಗ ಜನರು ಭ್ರಮನಿರಸರಾಗಿದ್ದಾರೆ. ಈ ಹಿಂದೆ ಯಾವ ಕಾಲದಲ್ಲಿಯು ಇಷ್ಟೊಂದು ಬೆಲೆ ಏರಿಕೆ ಆಗಿರಲಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್, ಕಬ್ಬಿಣ, ಬೇಳೆ ಕಾಳುಗಳು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಈಗ ಗಗನಕ್ಕೆ ಏರಿವೆ. ಸಾಮಾನ್ಯ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜನರು ಕಷ್ಟದಲ್ಲಿ ಜೀವನ ನಡೆಸುವ ಸ್ಥಿತಿಯನ್ನು ಬಿಜೆಪಿ ಸರ್ಕಾರ ನಿರ್ಮಾಣ ಮಾಡಿದೆ ಎಂದು ಬಿಜೆಪಿ ಸರ್ಕಾರದ ವಿರುದ್ದ ಕೀಡಿಕಾರಿದರು.